ರಮಳಾನ್ ಹೊಸ ಸಾಧ್ಯತೆಗೆ ಬಾಗಿಲು ತೆರೆಯಲಿ

ಸಂಪಾದಕೀಯ… ಒಬ್ಬ ಉತ್ತಮ ಕೃಷಿಕ ಕೃಷಿಗೆ ಸೂಕ್ತ ಸಮಯ ಮತ್ತು ಸ್ಥಳವನ್ನು ಆರಿಸಿಕೊಳ್ಳುವನು. ಮೀನುಗಾರ ಮೀನುಗಾರಿಕೆಯ ಸಮಯದಲ್ಲಿ ಸದಾ ನಿರತನಾಗಿರುವನು. ಒಬ್ಬ ವ್ಯಾಪಾರಿಯೂ ಅಷ್ಟೇ, ವ್ಯಾಪಾರದ ಸೀಸನ್ನ್ನು ಆತ ಮಿಸ್ ಮಾಡಲಾರ. ಒಬ್ಬ ಕೃಷಿಕನಿಗೆ, ಮೀನುಗಾರನಿಗೆ, ವ್ಯಾಪಾರಿಗೆ ಅದರ ಸೀಸನ್ಗಳು ಅತಿ ಮುಖ್ಯ. ಅವರ ವೃತ್ತಿಯಲ್ಲಿನ ಸೋಲು ಗೆಲುವನ್ನು ಈ ಸಮಯವು ನಿರ್ಧರಿಸುತ್ತದೆ. ಆ ಸಮಯದಲ್ಲಿನ ಅವರ ಶ್ರಮ, ಅರ್ಪಣಾಭಾವ, ತಲ್ಲೀನತೆ ಸರಿಸುಮಾರು ಮುಂದಿನ ಒಂದು ವರ್ಷಕ್ಕಿರುವ ಆದಾಯವನ್ನೂ ತಂದು ಕೊಡುತ್ತದೆ. ಆದರೆ ಆ ಸಮಯದಲ್ಲಿ ಕೃಷಿಕ […]
ಮುಸ್ಲಿಂ ಇತಿಹಾಸದ ಸುವರ್ಣ ನಿಮಿಷಗಳು

ಮುಸ್ಲಿಂ ಇತಿಹಾಸದ ಸುವರ್ಣ ನಿಮಿಷಗಳು ಎಂ.ಎ.ಇಸ್ಮಾಈಲ್ ಸಅದಿ ಮಾಚಾರ್ ಇಸ್ಲಾಮ್ ಅಲ್ಲಾಹನ ಬಳಿ ಸ್ವೀಕಾರಾರ್ಹ ಧರ್ಮವೆಂದು ಪರಿಶುದ್ಧ ಖುರ್ಆನಿನಲ್ಲಿದೆ. ಸಾರ್ವಕಾಲಿಕ ಸಂದೇಶಗಳು ಅದರಲ್ಲಿ ಅಡಗಿವೆ. ಇವೆಲ್ಲವನ್ನೂ ಕಲಿಸಿಕೊಟ್ಟದ್ದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಾಗಿದ್ದಾರೆ. ಅವರ ಉತ್ತಮ ಗುಣ ನಡತೆಯನ್ನು ಕಂಡು ಲಕ್ಷಾಂತರ ಜನರು ಇಸ್ಲಾಮ್ ಧರ್ಮಕ್ಕೆ ಆಕರ್ಷಿತರಾದರು. ಈ ಧರ್ಮದ ಸೌಂದರ್ಯ, ಸೌರಭ್ಯವನ್ನು ಮನಗಂಡು ಇಂದೂ ಕೂಡಾ ಯೂರೋಪ್ ನಂತಹ ಶ್ರೀಮಂತ ರಾಷ್ಟ್ರಗಳ ಜನರು, ಗಣ್ಯ ವ್ಯಕ್ತಿಗಳು ಇಸ್ಲಾಮ್ ಧರ್ಮ ಸ್ವೀಕರಿಸುತ್ತಿದ್ದಾರೆ. ಇಸ್ಲಾಮಿನ ಪೂರ್ವ ಕಾಲ ಸುವರ್ಣ […]
ಸಮಾಜ ಕಟ್ಟುವ ನಾಯಕರು ಬೇಕು

ಸಂಪಾದಕೀಯ ಸಮಾಜ ಕಟ್ಟುವ ನಾಯಕರು ಬೇಕು ನಮ್ಮ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಾಣಲು ಹುಟ್ಟಿಕೊಂಡ ಸಂಘಟನೆಗಳ ಲೆಕ್ಕವೂ ಸಣ್ಣದೇನಲ್ಲ. ಸಂಘಟನೆಗಳ ಹೆಸರಲ್ಲಿಯೂ ಅಲ್ಲದೆಯೂ ಸಮಾಜದ ಸುಧಾರಕರಾಗಿ, ಮಾರ್ಗದರ್ಶಕರಾಗಿ, ನಾಯಕರಾಗಿ ಹಲವರ ಮುಖಗಳನ್ನು ಈ ಸಮಾಜವು ಕಂಡಿದೆ. ಹಲವರ ಭಾಷಣಗಳಿಗೆ ಮಾರುಹೋಗಿದೆ. ಹಲವರ ಚಿಂತನೆಗಳಿಗೆ ತಲೆಬಾಗಿಸಿದೆ. ಹಲವರ ಆವೇಶಗಳಲ್ಲಿ ತನ್ನನ್ನು ಹಂಚಿಕೊಂಡಿದೆ. ಸಮಾಜದ ನಾಯಕರಾಗಿ ಬೆಳೆದು ಬಂದವರಿಂದ, ಅವರು ಕಟ್ಟಿದ ಸಂಘಟನೆಗಳಿಂದ, ಸಮಾಜದಲ್ಲಿ ಇತ್ತೀಚಿನ ವರ್ಷಗಳಲ್ಲಿ ಏನು ಬದಲಾವಣೆಗಳಾಗಿವೆ ಎನ್ನುವ ಪ್ರಶ್ನೆಗೆ ಆಯಾ ಸಂಘಟನೆಗಳಿಗೂ ಅವುಗಳ ನಾಯಕರಿಗೂ ಉತ್ತರಗಳಿರಬಹುದು. […]
ಅಜಬ್ ತುಂಬಿದ ರಜಜ್

ಅಜಬ್ ತುಂಬಿದ ರಜಜ್ ಅಬೂಹಾಮಿದ್ » ರಜಬುನ್ ಶಹ್ರುಲ್ಲಾಹ್, ವ ಶಅಬಾನು ಶಹ್ರೀ, ವರಮಳಾನು ಶಹ್ರು ಉಮ್ಮತ್ನೀ. ರಜಬ್ ಅಲ್ಲಾಹನ ತಿಂಗಳು, ಶಅಬಾನು ನನ್ನ ತಿಂಗಳು, ರಮಳಾನ್ ನನ್ನ ಉಮ್ಮತ್ನದ್ದು. ಹೀಗೊಂದು ಹದೀಸ್ ವಚನದ ಪರಂಪರೆಯ ಬಗ್ಗೆ ಹದೀಸ್ ವಿದ್ವಾಂಸರು ದುರ್ಬಲವೆಂದು ಅಭಿಪ್ರಾಯ ಹೇಳಿದ್ದರೂ ತಿಂಗಳಿನ ಮಹತ್ವವನ್ನು ತಿಳಿಸಲು ಇದು ಸಾಕೆಂದು ವಿದ್ವತ್ ಜಗತ್ತು ಅಂಗೀಕರಿಸುತ್ತದೆ. ಅಲ್ಲಾಹನ ಭವನವೆಂದು ಕಅಬಾಲಯದ ಬಗ್ಗೆ ಹೇಳುವುದು ಅದರ ಗೌರವವನ್ನು ಎತ್ತಿ ತೋರಿಸುವಂತೆ ರಜಬ್ ತಿಂಗಳನ್ನು ಶಹ್ರುಲ್ಲಾಹ್ ಎನ್ನುವುದು ಅದರ ಗೌರವ […]
ಮಕ್ಕಳನ್ನು ಮುದ್ದು ಮಾಡುವ ಮುನ್ನ…

ಮಕ್ಕಳನ್ನು ಮುದ್ದು ಮಾಡುವ ಮುನ್ನ… ಎಂ. ಮುಸ್ತಫಾ ಸಅದಿ ಹರೇಕಳ ಮಕ್ಕಳು; ಅಲ್ಲಾಹನು ನಮಗೆ ಕೊಟ್ಟ ದೊಡ್ಡ ಸಂಪತ್ತು. ಮಕ್ಕಳಿಲ್ಲದೆ ಕಣ್ಣೀರಿಳಿಸುವ ದಂಪತಿಗಳು ನಮ್ಮ ಸಮಾಜದಲ್ಲಿ ಅದೆಷ್ಟೋ ಮಂದಿಯಿದ್ದಾರೆ. ಒಂದು ಮಗುವಿಗಾಗಿ ಏನೆಲ್ಲಾ ಚಿಕಿತ್ಸೆ, ಹರಕೆ ಮುಂತಾದವುಗಳನ್ನೆಲ್ಲ ಮಾಡಿಯೂ ದುಃಖಿತರಾದವರೂ ನಮ್ಮಲ್ಲಿ ಹಲವು ಮಂದಿ. ಗಂಡು ಮಗುವಿದ್ದು; ಒಂದು ಹೆಣ್ಣು ಮಗುವಿಗಾಗಿ ಆಸೆ ಪಡುವವರು, ಹೆಣ್ಣು ಮಗುವಿದ್ದು ಒಂದು ಗಂಡು ಮಗುವಿಗಾಗಿ ಆಸೆಪಡುವವರು. ಆದರೆ ಮಕ್ಕಳನ್ನು ಕೊಡುವುದು ಕೊಡದಿರುವುದು ಗಂಡು – ಹೆಣ್ಣು ಎಂಬ ವ್ಯತ್ಯಾಸ ಅದು […]
ನಡೆದುಕೊಂಡು ನಿಯ್ಯತ್?

ಪ್ರ: ನಮಾಝಿನ ನಿಯ್ಯತ್ತನ್ನು ನಡೆದುಕೊಂಡು ಬರುವಾಗ ಮಾಡಬಹುದೆ? ನಿಂತುಕೊಂಡೇ ಮಾಡಬೇಕೆಂದಿದೆಯೆ? ಉ: ನಿಂತುಕೊಂಡೇ ಆಗಬೇಕು. ನಿಶ್ಚಲ ಸ್ಥಿತಿಯಲ್ಲೇ ನಮಾಜಿನ ನಿಯ್ಯತ್ ಮಾಡಬೇಕೆನ್ನುವುದು ನಿಯ್ಯತ್ನ ಶರ್ತಗಳಲ್ಲೊಂದಾಗಿದೆ. ನಮಾಜಿನ ಫರ್ಗಳಲ್ಲಿ ನಿಯ್ಯತ್’ ಮೊದಲನೆಯದ್ದಾಗಿದ್ದು ನಮಾಜಿಗಾಗಿ ’ಸಾಧ್ಯವಿರುವವರು ನಿಲ್ಲುವುದು’ ಮೂರನೇ ಫರ್ಳ್ ಆಗಿದೆ. ಆದರೂ ನಿಯ್ಯತನ್ನು ಮೊದಲು ಮಾಡಿ ನಂತರ ನಿಲ್ಲುವಂತಿಲ್ಲ.’ನಿಲ್ಲುವಿಕೆ’ಯನ್ನು ಫರ್ಳ್ ಆಗಿ ಗಣಿಸಿರುವುದು ಫರ್ಳ್ ನಮಾಜ್ಗೆ ಮಾತ್ರ. ಸುನ್ನತ್ ನಮಾಜ್ಗೆ ಇದು ಬಾಧಕವಲ್ಲ, ಸುನ್ನತ್ ನಮಾಜನ್ನು ಕುಳಿತೂ ನಿರ್ವಹಿಸಬಹುದಾದುದರಿಂದ ಇದಕ್ಕಾಗಿ ನಿಯ್ಯತ್ತನ್ನು ಕುಳಿತುಕೊಂಡು ಮಾಡಬಹುದು. ನಿಯ್ಯತ್ ಮತ್ತು ತಕ್ಬೀರತುಲ್ […]
ಮೂತ್ರ ಹನಿಸಿದರೆ?

ಪ್ರ : ಮೂತ್ರ ಶಂಕೆಯ ನಂತರ ಕೊನೆಯಲ್ಲಿ ಉಳಿದ ಒಂದೆರಡು ಹನಿಗಳು ಕುಳಿತಲ್ಲಿಂದ ನೇರ ನಿಂತು ಕೊಂಡ ನಂತರ ಹೊರ ಬಂದು ವಸ್ತ್ರಕ್ಕೆ ತಾಗುತ್ತದೆ. ಇದನ್ನು ಶುಚೀಕರಿಸದೆ ಇದೇ ವಸ್ತ್ರದಲ್ಲಿ ನಮಾಜು ಮಾಡುವುದರಿಂದ ತೊಂದರೆ ಇದೆಯೆ? ಉ : ಮೂತ್ರದ ಒಂದು ಹನಿಯೂ ನಜಸ್ ಆಗಿದೆ. ಅದು ನಮಾಜು ಮಾಡುವವನ ವಸ್ತ್ರ, ಶರೀರದಲ್ಲಿದ್ದರೆ ಅದರೊಂದಿಗೆ ನಮಾಜು ಸಿಂಧುವಾಗುವುದಿಲ್ಲ. ಆದ್ದರಿಂದ ಮೂತ್ರ ಶಂಕೆಯ ಕೊನೆಯಲ್ಲಿ ಉಳಿಯುವ ಮೂತ್ರದ ಹನಿಯು ಶರೀರಕ್ಕೆ ಯಾ ವಸ್ತ್ರಕ್ಕೆ ತಾಗದಂತೆ ಜಾಗ್ರತೆ ವಹಿಸಬೇಕು. ಅದಕ್ಕಾಗಿ […]
ಮಣಿಗಂಟಿನ ಕೆಳಗಿನ ವಸ್ತ್ರ

ಪ್ರಶ್ನೆ: ನಮಾಜಿನಲ್ಲಿ ಕಾಲಿನ ಮಣಿಗಂಟಿನ ಕೆಳಗೆ ವಸ್ತ್ರವನ್ನು ಇಳಿ ಬಿಡುವುದರ ವಿಧಿ ಏನು? ಹೀಗೆ ವಸ್ತ್ರವು ಕೆಳಗಿದ್ದರೆ ನಮಾಜ್ ಸಿಂಧುವೆ? ಉತ್ತರ: ನಮಾಜಿನಲ್ಲಿ ಕಾಲಿನ ಮಣಿಗಂಟಿಗಿಂತ ಕೆಳಗೆ ವಸ್ತ್ರವು ಇಳಿದಿದ್ದರೆ ನಮಾಜ್ನ ಸಿಂದುತ್ವಕ್ಕೆ ಅಡ್ಡಿ ಇಲ್ಲ. ಆದರೆ ನಮಾಜಿನಲ್ಲಾಗಲೀ ಇತರ ವೇಳೆಯಲ್ಲಾಗಲೀ ಕಾಲಿನ ಮಣಿಗಂಟಿಗಿಂತ ಪುರುಷರು ತಮ್ಮ ವಸ್ತ್ರವನ್ನು ಕೆಳಗೆ ಇಳಿ ಬಿಡುವುದು ಕರಾಹತ್ ಆಗಿದೆ. ಅಹಂಭಾವದಿಂದ ಹೀಗೆ ಧರಿಸುವುದಾದರೆ ಅದು ಹರಾಮ್ ಆಗಿದೆ. ತುಪ್ಪ 3/55.
ಮಕ್ಕಳು ನನ್ನ ಉಪವಾಸ ಹಿಡಿದರೆ ಸಾಕೆ?

ಪ್ರಶ್ನೆ: ರಮಳಾನಿನಲ್ಲಿ ಅನಾರೋಗ್ಯ ಕಾರಣದಿಂದ ಉಪವಾಸ ಹಿಡಿಯಲಾಗಲಿಲ್ಲ. ಈಗ ರೋಗವಾಸಿಯಾಗಿದೆ. ನನಗೀಗ ವೃದ್ಧಾಪ್ಯ. ಉಪವಾಸ ಹಿಡಿಯಲು ಹೆಚ್ಚಿನ ಆರೋಗ್ಯವೂ ಇಲ್ಲ. ಹಾಗಿರುವಾಗ ನಾನು ಉಪವಾಸ ಖಳಾ ಸಂದಾಯ ಮಾಡಬೇಕೆ? ಖಳಾ ಸಂದಾಯ ಮಾಡುವುದಿದ್ದರೂ (ಪ್ರಾಯಶ್ಚಿತ್ತ) ನೀಡಬೇಕೆ? ನನ್ನ ಪರವಾಗಿ ನನ್ನ ಮಕ್ಕಳು ಉಪವಾಸ ಹಿಡಿದರೆ ಆಗುತ್ತದೆಯೆ? ವಿವರಿಸುವಿರಾ? ಉತ್ತರ: ರೋಗ ಕಾರಣದಿಂದ ಖಳಾ ಆದ ಉಪವಾಸವನ್ನು ನಂತರ ಖಳಾ ಪೂರೈಸುವುದು ಕಡ್ಡಾಯ. ವೃದ್ಧಾಪ್ಯದ ಸಹಜ ನಿಶ್ಯಕ್ತಿ ಕಾರಣ ಉಪವಾಸವು ತೀರಾ ಅಸಾಧ್ಯವೆಂಬ ಹಂತಕ್ಕೆ ತಲುಪಿದ್ದಲ್ಲಿ ಖಳಾ ಪೂರೈಕೆ […]
ತಾಜುಶ್ಶರೀಅಃ ಶೈಖುನಾ ಅಲೀ ಕುಂಞಿ ಮುಸ್ಲಿಯಾರ್ ಶಿರಿಯ

ಪವಿತ್ರ ಪಂಡಿತ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ. ನಡೆನುಡಿಗಳಲ್ಲಿ, ವೇಷಭೂಷಣದಲ್ಲೆಲ್ಲ ಹಳೇಕಾಲದ ಸಾತ್ವಿಕ ಪರಂಪರೆಯ ಪ್ರತೀಕದಂತಿದ್ದ ಮಹಾವಿದ್ವಾಂಸ ತಾಜುಶ್ಶರೀಅಃ ಶೈಖುನಾ ಅಲೀ ಕುಂಞಿ ಮುಸ್ಲಿಯಾರ್ ಶಿರಿಯ ಅಲ್ಲಾಹನ ವಿಧಿಗೆ ಓಗೊಟ್ಟಿದ್ದಾರೆ. ದಕ್ಷಿಣ ಭಾರತದ ಅತ್ಯುನ್ನತ ಉಲಮಾ ಒಕ್ಕೂಟವಾದ ’ಸಮಸ್ತ’ದ ಅತ್ಯಂತ ಹಿರಿಯ ಸದಸ್ಯರಾಗಿರುವ, ಪ್ರಸ್ತುತ ಅದರ ಉಪಾಧ್ಯಕ್ಷರೂ, ಜಾಮಿಅ ಸಅದಿಯ್ಯಾ ವಿದ್ಯಾಸಂಸ್ಥೆಯ ಉಪಾಧ್ಯಕ್ಷರೂ ಕೆಲವು ಮೊಹಲ್ಲಾಗಳ ಖಾಝಿಗಳೂ ಆಗಿರುವ ತಾಜುಶ್ಶರೀಅಃ ತಮ್ಮ 87ನೇ ವರ್ಷದಲ್ಲಿ ಕೊನೆಯುಸಿರೆಳೆದರು. ಕೆಲವು ದಿನಗಳಿಂದ ಅವರು ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಗಡಿನಾಡು ಕಾಸರಗೋಡಿನ […]