ಆತ್ಮಜ್ಞಾನಿಗಳ ಅಧಿಪತಿ ಅಹ್ಮದುಲ್ ಕಬೀರ್ ರ್ರಿಫಾಈ (ರ)

ಆತ್ಮಜ್ಞಾನಿಗಳ ಅಧಿಪತಿ ಅಹ್ಮದುಲ್ ಕಬೀರ್ ರ್ರಿಫಾಈ (ರ) ಹಾಫಿಳ್ ಮುಹಮ್ಮದ್ ಹಾಶಿರ್ ಆತ್ಮಜ್ಞಾನಿಗಳ ದೊರೆಯಾಗಿ ಆಧ್ಯಾತ್ಮಿಕ ಲೋಕವನ್ನು ಆಳಿದ ಸೂಫಿ ಸಂತರಾಗಿದ್ದಾರೆ ಶೈಖ್ ಅಹ್ಮದುಲ್ ಕಬೀರ್ ರಿಫಾಈ. ಅವರದ್ದು ಜ್ಞಾನ, ಭಕ್ತಿ, ದಯೆ, ಸಹನೆ, ಸಹಾನುಭೂತಿ ಇತ್ಯಾದಿ ಸದ್ಗುಣ ಮೇಳೈಸಿದ ವಿಶಿಷ್ಟ ವ್ಯಕ್ತಿತ್ವವಾಗಿತ್ತು. ಗರ್ಭಾವಸ್ಥೆಯಲ್ಲೇ ತಂದೆಯನ್ನು ಕಳೆದುಕೊಂಡ ಅವರು ಬೆಳೆದದ್ದು ಸೋದರ ಮಾವ ಶೈಖ್ ಮನ್ಸೂರ್ರವರ ಪೋಷಣೆಯಲ್ಲಿ. ಏಳನೇ ವರ್ಷದಲ್ಲಿ ಖುರ್ಆನ್ ಕಂಠಪಾಟ ಮಾಡಿದ ಅವರು ಬಳಿಕ ಅಂದಿನ ಅನೇಕ ಅಗ್ರೇಸರ ವಿದ್ವಾಂಸರ ಬಳಿ ಉನ್ನತ ಶಿಕ್ಷಣ […]
ಖುರ್ಆನಿನ ಕದ ತೆರೆದಾಗ…

ಎಸ್.ಪಿ. ಹಂಝ ಸಖಾಫಿ ಬಂಟ್ವಾಳ ಬರೆಯಲು ಕುಳಿತು ಖುರ್ ಆನ್ ಎಂಬ ವಿಷಯವನ್ನು ಆರಿಸಿಕೊಂಡಿದ್ದೇನೆ. ಎದುರಿಗೆ ಒಂದಿಷ್ಟು ಕದಗಳು ತೆರೆದುಕೊಂಡಿವೆ. ಒಂದೊಂದಕ್ಕೆ ಇಣುಕಿ ನೋಡಿದಾಗ ಮತ್ತೂ ಕದಗಳು ತೆರೆಯುತ್ತಿವೆ. ಯಾವ ಕದದೊಳಗೆ ಪ್ರವೇಶ ಮಾಡಿದರೂ ಪ್ರಯಾಣ ಮುಗಿಯದು. ಖುರ್ಆನ್ ಎಂಬ ವಿಷಯ ಹಾಗೆಯೇ. ನಿಜಕ್ಕೂ ಖುರ್ಆನ್ನ ಅರಿವು ನೀಡಲಾದಂತಹ ಭಾಗ್ಯವಂತ ಮತ್ತೋರ್ವ ಇಲ್ಲ. ಅದೊಂದು ಮಹಾ ಸೌಭಾಗ್ಯ. ಒಬ್ಬ ತಂದೆ ತನ್ನ ಮಗನನ್ನು ಖುರ್ಆನ್ ಕಲಿಯಲು ಕಳುಹಿಸಿಕೊಡುತ್ತಾರೆಂದಾದರೆ… ಕೇವಲ ಪಾರಾಯಣ ಮಾತ್ರವಲ್ಲ; ಅದರೊಳಗಿನ ಜ್ಞಾನವನ್ನು ಸಜ್ಜನರ ಹಾದಿಯಲ್ಲಿ […]